ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಅಂಕೋಲಾ: ರಸ್ತೆ ಅಪಘಾತದಲ್ಲಿ ಐವರ ದುರ್ಮರಣ

ಅಂಕೋಲಾ: ರಸ್ತೆ ಅಪಘಾತದಲ್ಲಿ ಐವರ ದುರ್ಮರಣ

Sat, 16 Jan 2010 02:56:00  Office Staff   S.O. News Service
ಅಂಕೋಲಾ, ಜನವರಿ 15:  ಶಬರಿಮಲೆಯಿಂದ ಹಿಂದಿರುಗುತ್ತಿದ್ದ ಭಕ್ತರ ತಂಡ ಪ್ರಯಾಣಿಸುತ್ತಿದ್ದ ವ್ಯಾನ್ ನಿನ್ನೆ ಸಂಜೆ ಸುಮಾರು ಐದು ಘಂಟೆಗೆ ಅಂಕೋಲಾ ಸಮೀಪದ ರಾಮನಗುಳಿ ಎಂಬ ಗ್ರಾಮದ ಬಳಿ ಅದಿರು ಲಾರಿಯೊಂದಕ್ಕೆ ಢಿಕ್ಕೆ ಹೊಡೆದ ಪರಿಣಾಮವಾಗಿ ಐವರು ಸ್ಥಳದಲ್ಲಿಯೇ ಸಾವನ್ನಪ್ಪಿ ಇನ್ನೂ ಎಂಟು ಜನರಿಗೆ ಗಾಯಗಳಾಗಿವೆ.
15_ankola_accident_2.jpg
15_ankola_accident_3.jpg
15_ankola_accident_4.jpg
15_ankola_accident_5.jpg 
15_ankola_accident_7.jpg
15_ankola_accident_8.jpg
 
ಈ ಭಕ್ತರು ಬಾಗಲಕೋಟೆಯವರಾಗಿದ್ದು ಶಬರಿಮಲೆ ಯಾತ್ರೆಯನ್ನು ಮುಗಿಸಿ ತಮ್ಮ ಊರಿಗೆ ಹಿಂದಿರುಗುತ್ತಿದ್ದರು.  ಅಪಘಾತದ ವೇಲೆ ಲಾರಿ ವಿರುದ್ಧ ಬದಿಯಿಂದ ಧಾವಿಸಿದ್ದೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ಪರಿಶೀಲನೆಯಿಂದ ಕಂಡುಬಂದಿದೆ. ಲಾರಿ ಯಲ್ಲಾಪುರದಿಂದ ಅಂಕೋಲಾ ಕಡೆಗೆ ಧಾವಿಸುತ್ತಿತ್ತು. 

ಗಾಯಗೊಂಡವರಲ್ಲಿ ಐವರ ಸ್ಥಿತಿ ಚಿಂತಾಜನಕವಾಗಿದ್ದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.  ಉಳಿದವರನ್ನು ಅಂಕೋಲಾದ ಆಸ್ಪತ್ರೆಯಲ್ಲಿ ಸೇರಿಸಲಾಗಿದೆ.  

ಮೃತರ ವಿವರಗಳು:  ಅಜ್ಜಾ ಸ್ವಾಮಿ ಪುರಾಣಿಕ್ (60), ವ್ಯಾನ್ ಚಾಲಕ ಪಿಂಟೋ (30), ಮಹಾಲಿಂಗಪ್ಪ ಕಾಳಪ್ಪ (30), ಶಿವಾನಂದ ಪಳಿಕಾಯಿ (35) ಮತ್ತು ಸಂಜೀವ ಮಲ್ಲಪ್ಪ ಬಡಿಗೇರ(12).
 
ಎಲ್ಲರೂ ಬಾಗಲಕೋಟೆಯ ಮುಧೋಳ ಗ್ರಾಮದವರಾಗಿದ್ದಾರೆ. 



Share: